Saturday, August 6, 2011

ಕವಿ ಗುಲ್ಜಾರ್...

ಗುಲ್ಜಾರ್ ಕವಿತೆ ನನಗೆ ತುಂಬಾ ಇಷ್ಟ. ಅದೆಂತಹ ಕಲ್ಪನೆ. ಅದೆಂತಹ ಪ್ರಸ್ತುತಿ. ಒಂದೇ ಕವಿತೆ ಕೇಳಿದ್ರೆಸಾಕು..ಗುಲ್ವಾರ್ ಮನಕ್ಕಿಳಿದು ಬಿಡುತ್ತಾರೆ.

ವಯಸ್ಸು ಅದೆಷ್ಟೋ ಆದ್ರೂ ಕವಿತೆ ಉಗಮಿಸೋ ಮನಸ್ಸು ಇನ್ನು ಜವಾನ್ ಹೈ...ಇನ್ನ ಸ್ಪಷ್ಟ ದೃಷ್ಟಿಕೋನ ಇಟ್ಟುಕೊಂಡಿದೆ ಹೊಸ ಪ್ರಯೋಗಗಳಿಗೆ ತೆರೆದು ಕೊಳ್ಳುತ್ತದೆ.


ಕವಿ
ಗುಲ್ಜಾರ್ ಆಗಿನಿಂದಲೂ ಬರೀತಾ ಇದ್ದಾರೆ. ಈಗಲೂ ಗುಲ್ಜಾರ್ ಉತ್ಸಾಹ ನಿಲ್ಲುವ ನಿಶಾನೆ ತೋರುತ್ತಿಲ್ಲ. ಸಾಗುತ್ತಲ್ಲೇ ಇದೆ ಭಾವಾಲೋಕದಲ್ಲಿ...


ಗುಲ್ಜಾರ್
ಕವಿತೆ ಇತ್ತೀಚಿನ ಇಸ್ಕಕೀಯಾ ಸಿನಿಮಾದಲ್ಲೂ ಇದ್ದವು.`ದಿಲ್ ಥೋ ಬಚ್ಚಾ ಹೈ ಜೀ' ಅಂತಲೇ ಈ ವಯಸ್ಸಿನಲ್ಲೂ ಚಂಚಲ ಮನದ ಮಸ್ತಿ ಬರೆದಿದ್ರು. ದಿಲ್ ಸಾ ಕೋಯಿ ಕಮೀನಾ ನಹೀ ಅಂದವರೂ ಇದೇ ಗುಲ್ಜಾರ್...


ಇದೇನೋ ಸಿನಿಮಾ ಮಾತಾಯಿತು. ತೆರೆ ಹಿಂದೆ ಗುಲ್ಜಾರ್ ಕವಿತಾ ಪ್ರೀಯರು ಸಾಕಷ್ಟು ಜನ. ಅದಕ್ಕೋ ಏನೋ...ಯು ಟ್ಯೂಬ್ ನಲ್ಲಿ ಗುಲ್ಚಾರ್ ಪೊಯೆಟ್ರಿ ಅಂತ ಬರೆದು ಕೀ ಬೋರ್ಡ್ ನ ಎಂಟರ್ ಕೀ ಹೊಡೆದ್ರೆ ಆಯಿತು. ಸಾಲು..ಸಾಲು ಗುಲ್ಚಾರ್ ಕವಿತೆಗಳು ಸಿಗುತ್ತವೆ. ಅವರೇ ಹೇಳಿದ ಆ ಕವಿತೆ ಒಂದಷ್ಟು ತುಣುಕು ಇಲ್ಲಿವೆ...ಅವುಗಳನ್ನ ತರ್ಜುಮೆ ಮಾಡೋ ಪುಟ್ಟ ಪ್ರಯತ್ನ ಮಾಡಿದ್ದೇನೆ..


ನೀ ಧರೆಗಿಳಿಸಿದ ಆ ದಿನ

ತೋಟದಲ್ಲಿ ಈಗಲೂ

ಖಾಯಂ ಆಗಿದೆ...


ರಂಗು
ಮಾಸಿಲ್ಲ..

ದಿನವೂ ಕೆಟ್ಟು ಹೋಗಿಲ್ಲ.

ನೀ ಬಿಟ್ಟು ಹೊದಂತೇನೆ ಇದೆ.

ಇಲ್ಲಿ
ಬರೋ ಅಳಿಲಿಗೆ

ಈಗೀಗ ನಾನೂ ನಿನ್ನಂತೆ

ಬಿಸ್ಕತ್ ತಿನಿಸುತ್ತೇನೆ...

ಆದ್ರೂ, ಅಳಿಲು ನನ್ನ

ಅನುಮಾನಿಸುತ್ತವೆ.

ಅವು ನಿನ್ನ ಇನ್ನು

ಮರೆತಿಲ್ಲವೋ ಏನೊ..


ದಿನದ
ಸ್ಕಾರ್ಪ್ ತೆಗೆದು

ಹಾಕುತ್ತೇನೆ. ನೀ ಬಿಟ್ಟು

ಆ ದಿನದ ನೆನಪನ್ನು ಧರಿಸಿ

ಕೊಂಡು ಜೀವಿಸುತ್ತೇನೆ....
ಜೀವಿಸುತ್ತಿದ್ದೇನೆ....


ಇಂತಹ
ಕವಿತೆಗಳು ಹಲವು ಇವೆ. ಒಂದಕ್ಕಿಂತ ಒಂದು ವಿನೂತನ. ಭಾವ ಪರವಶರಾಗುವ ಮನಸಿದ್ದರೆ ಆಯಿತು. ಕವಿ ಗುಲ್ಚಾರ ಕವನಗಳು ಮೈ..ಮನ ಆವರಿಸಿಕೊಳ್ಳುತ್ತವೆ. ಹೊಸ ಉತ್ಸಾಹ...ಹೊಸ ಹುಮ್ಮಸ್ಸು ಮೂಡುತ್ತದೆ...ಅದಕ್ಕೇ ಗುಲ್ಜಾರ್ ಹೇಳಿರಬೇಕು... ನೋವು....ಬಹಳ ದಿನದ್ದಲ್ಲ ಅಂತ...ಹೌದು..! ಕವಿತೆಯೊಂದರ ಸಾಲುಗಳಲ್ಲಿ ಗುಲ್ಚಾರ ಈ ಮಾತು ಹೇಳಿದ್ದಾರೆ. ಅದರ ತಾತ್ಪರ್ಯ ಈ ಥರ ಇದೆ...


ನೋವು ಕೆಲವೇ ಕ್ಷಣದ್ದು..

ಅದಕ್ಕೆ ಅಷ್ಟೊಂದು ಶಕ್ತಿಯಿಲ್ಲವೇ ಇಲ್ಲ...

ಬಂದು ಹೋಗುತ್ತದೆ..ಬಂದು ಕಾಡುತ್ತದೆ

ಅಷ್ಟೆ. ಚಿಂತಿಸಬೇಕಿಲ್ಲ ಅಂತಾರೆ...


ಥರ ಗುಲ್ಚಾರ್ ಕವಿತೆಗಳಿಂದ ಕಾಡುತ್ತಾರೆ. ವಿಶಿಷ್ಟ ಕಂಚಿನ ಕಂಠದಿಂದ ಆಕರ್ಷಿಸುತ್ತಾರೆ. ಅದೆಷ್ಟೋ ಜನಕ್ಕೆ ಈ ಗುಲ್ಚಾರ್ ಚಿರಪರಚಿತ. ನನಗೆ ಈಗಷ್ಟೆ ಮನದಲ್ಲಿ ಇಳಿದಿದ್ದಾರೆ...


-ರೇವನ್

No comments: