
ಅದೇನೋ ತಾಕಿದರೆ ಮುಗಿಯಿತು.
ಇನ್ನಿಲ್ಲದ ದು:ಖ ಆವರಿಸಿ ಬಿಡುತ್ತದೆ.
ಅಂದದ ಜಗತ್ತು ಕಂಡಾಗ ನವೋ
ಉಲ್ಲಾಸದ ಬುಗ್ಗೇನೆ ಆಗಿ ಬಿಡುತ್ತದೆ.
ಇನ್ನು ಸಂಗೀತವೋ. ಇದರ ಒಂದೇ
ಲಹರಿಗೆ ಮನದಲ್ಲಿ ಶಾಶ್ವತ ಮಿಡಿತವೇ
ಬಿಡಿ. ಯಾವುದೇ ಗೀತೆಯಿರಲಿ.ಒಂಚೂರು
ತಟ್ಟಿದರಾಯಿತು. ಎಲ್ಲೋ ಕಳೆದು ಹೋಗುವ
ಮಂಕು ಮನಸ್ಸಿದು.
ಮನಸ್ಸು ಗಟ್ಟಿಯಾಗ್ತಾನೇ ಇಲ್ಲ. ಹಾಗೆ ಆದ್ರೂ
ಅದು ಸರಿ ಹೋಗೋಲ್ಲ. ಕಾರಣ ಮನದಾಳ
ಸದಾ ಹೊಸತನ್ನ ಬೇಡುತ್ತಿದೆ...
- ರೇವನ್
No comments:
Post a Comment