Monday, July 26, 2010

ಬೇಡವೆಂದರೂ ಕಾಡುವ ನೋವು...

ತಂಪು ಗಾಳಿ ನನಗೆ ಆಗೋದಿಲ್ಲ.
ತಂಗಾಳಿ ಬೀಸಿದಾಗ ನೆನಪುಗಳು
ತಾಜಾ ಆಗುತ್ತದೆ. ಗಾಳಿಯಂತೇನೆ
ಹಳೆ ನೋವುಗಳು ಮತ್ತೆ ಕನಲುತ್ತವೆ.

ತಂಗಾಳಿ ಅಷ್ಟೇ,ಅಲ್ಲ. ಪ್ರತಿ ವರ್ಷದ
ಪ್ರತಿ ವೃತು ನೋವುಂಟು ಮಾಡುತ್ತದೆ
ಮಳೆ ಬಂದರೆ, ಶಾಲಾದಿನಗಳು
ಕಾಡುತ್ತವೆ. ಚಳಿಗಾಳ ಬಂದ್ರೆ
ಮುಗಿಯಿತು. ಶಾಲೆಯ ತಣ್ಣನೆಯ ಬೆಂಚು.
ಅಮ್ಮನ ನೆನಪು. ಮನೆಕಡೆ ಓಡಿ ಹೋಗಬೇಕೆನ್ನುವ
ಸೆಳೆತ ಮನದಲ್ಲಿ ಮೂಡುತ್ತದೆ

ಬೇಸಿಗೆ ಬಂದರೂ ಇದೇ ರೀತಿಯ ಅನುಭವ
ನೋವಿಲ್ಲದೇ ಇದ್ದರೂ ನಿದ್ಧೆ ಇರದ ಆ ದಿನಗಳು
ಕಣ್ಮುಂದೆ ಬರುತ್ತವೆ. ಹೀಗೆಕೆ ಆಗ್ತದೋ..ಇಲ್ಲಿವರೆಗೂ
ಅರ್ಥವಾಗಿಲ್ಲ. ವಯಸ್ಸು ೩೩ ಆಯಿತು. ಮಳೆ ಬರುತ್ತದೆ
ಚಳಿ ಬರುತ್ತದೆ. ತಂಗಾಳಿ ಬೀಸುತ್ತದೆ. ನನ್ನ ನೆನಪು
ಬದಲಾಗುತ್ತಿಲ್ಲ...

- ರೇವನ್

Wednesday, July 7, 2010

ಚುಕ್ಕಿ...

ಚುಕ್ಕಿ ಮೂಡ್ಯಾವು ಆಕಾಶದಾಗ
ಕಪ್ಪು ಮೋಡ ಆವರಿಸ್ಯಾವು ಚುಕ್ಕಿ ಸುತ್ತ
ಮಳೆ ಬರುವ ಚಿಂತಿ ನನ್ನಾಕೆಗ...

ಆಕಾಶದಾಗ ಚುಕ್ಕಿ ಮೂಡಿದ್ರ ಮಳಿಬರುದಿಲ್ಲ.
ಆದ್ರೆ, ನನ್ನಾಕೆ ಎದಿಯಾಗಆತಂಕ ಮುಡೈತಿ

ಮಳೆ ನೋಡು ರೈತರಂಗಈಕಿ ಕಾಳ್ಜಿ.
ಈಕಿ ಜೀವ ಚುಟು..ಚುಟುಅಂತೈತಿ.
ಇದಕ್ಕ ಕಾರಣ ಏನೂ ಇಲ್ಲ.ಯ್ಯಾಕಂದ್ರ ಈಕಿ ಹಿಂಗ.

ಚುಕ್ಕಿಯಂಗ ಮಿನಗ್ತಾಳ..ಮಿಂಚಿನಂಗ ಗುಡಗ್ತಾಳ
ಇಲ್ಲಂದ್ರ ಕರಗಿದ ಮೋಡದಂಗ ಅಳ್ತಾಳ.ಈಕಿ ಹಿಂಗ ರೀ...

- ರೇವನ್

Saturday, July 3, 2010

ಹರೆಯ ಉಕ್ಕಿ...


ರೆಯ ಉಕ್ಕಿತು
ಮೊಡವೆ ಮೂಡಿತು,
ಬದುಕೆಂಬ ಪಯಣದಲ್ಲಿ...

ಕನಸು ಸಾಗಿತು ಒಲವು ಗರಿಗೆದರಿತು
ಹೃದಯ ಭಾವದಲ್ಲಿ...

ನೋವು ಪರಿಚಿತವಾಯಿತು
ನಲಿವು ಅಹ್ಲಾದಕರವೆನಿಸಿತು...

ಯಾಕೋ ಏನೋ..ಇನ್ನು ಅವಳ
ಪ್ರವೇಶವೇ ಆಗಿಲ್ಲ. ದೂರವಿದ್ದಾಳಾ...?
ಹತ್ತಿರ ಬಂದವಳಾ....?????

ಹರೆಯ ಉಕ್ಕಿದೆ..ನಿರೀಕ್ಷೆ ಮೂಡಿದೆ..

- ರೇವನ್

ಒಂದು ಸಾಲು...

ಒಂದೇ ಒಂದು ಸಾಲು..
ಇದು ಅರ್ಥವಾಗುದಿಲ್ಲ.
ಹೃದಯದ ಬಾಗಿಲವನ್ನಂತು ತಟ್ಟುತ್ತದೆ
ಅದು ನನ್ನ ಶ್ರೀದೇವಿಯ ಹುಚ್ಚು ಪ್ರೀತಿಯ ಥರ.

- ರೇವನ್

ಬಾಲ್ಯ..

ಬಾಲ್ಯವೇ ಹಾಗೆ..
ಪ್ರೀತಿಯ ಅಮ್ಮನ ಗದರಿಕೆ
ಕೊಂಚ ಭಯವಿದ್ದರೂ ಅದು ತಾತ್ಕಾಲಿಕ.

ಬಾಲ್ಯದ ಆಟ-ಪಾಠ ಚೆಂದ
ಅದ್ಯಾರೊ ಕಾಡುತ್ತಾರೆಂಬ ಚಿಂತೆಯಿಲ್ಲ.
ಅವಳು ಚೇಡಿಸುತ್ತಾಳೆಂಬ ಪ್ರೀತಿ ತುಂಬಿದ ಭಯವೂ ಇಲ್ಲ.

ಏನೇ ಇದ್ದರೂ ಬಾಲ್ಯದಲ್ಲಿ ಸ್ವಚ್ಛದ ಆಕಾಶ..ನೀಲಾಕಾಶ
ತಿಳಿ..ತಿಳಿ ನೀರ ಕೊಳದ ಪ್ರಶಾಂತೆಯಂತೆ.
ನೋವಿಲ್ಲ..ಅರಿವಿಲ್ಲ. ಏನೇ ಇದ್ದರೂ ಅದು ಮುಗ್ಧತೆ ಮತ್ತು ಮುಗ್ಧತೆ.

-ರೇವನ್